ಆತ್ಮಿಯರೇ ...
ಬಹಳ ದಿನಗಳ ನಂತರ ಬ್ಲಾಗ್ ನ ತೆರೆಯುತ್ತಿದ್ದೇನೆ ..... ಕೆಲಸಗಳ ಒತ್ತಡ ಹಾಗು ಇಂಟರ್ನೆಟ್ ನ ತೊಂದರೆ ಯಿಂದ ಬ್ಲಾಗ್ ನ ಅಪ್ಡೇಟ್ ಮಾಡಲು ಸಾಧ್ಯವಾಗಲಿಲ್ಲ ....
ಈ ಮದ್ಯೆ ಅನೇಖ ಸಂಗತಿಗಳು ,ಅನೇಖ ಕಾರ್ಯಕ್ರಮಗಳು ನಡೆದಿವೆ .... ಸಂಪ ಚಂಡೆ ನಿನಾದ ಪುಸ್ತಕ ಬಿಡುಗಡೆಗೆ ಆಗಮಿಸಿದ ಪರಮ ಪೂಜ್ಯರ ಅನುಗ್ರಹ ವಿಶೇಷ ವೆಂಬಂತೆ ಕೇವಲ ಎರಡು ದಿನಗಳಲ್ಲಿ ನಮ್ಮ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀ ರಮೇಶ ಹೆಗಡೆ ಗುಂಡೂಮನೆ ಗೋ ಸಂರಕ್ಷಣೆಯ ಕುರಿತಾಗಿ "ವಿಶ್ವಮಾತೆ"ಎನ್ನುವ ಪ್ರಸಂಗವನ್ನು ರಚಿಸಿದ್ದಾರೆ ಈಗಾಗಲೇ ಅನೇಖ ಪ್ರದರ್ಶನಗೊಂಡ "ವಿಶ್ವಮಾತೆ "ಯಕ್ಷಗಾನ ಪ್ರೇಮಿಗಳನ್ನೋಳಗೊಂಡಂತೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದೆ