Saturday, November 20, 2010

 
ಹೊಸನಗರ ತಾಲೂಕು ಮಾರುತಿಪುರ ಶ್ರೀ ರಾಮಾರ್ಪಣ ಕಲಾವೇದಿಕೆ ಏರ್ಪಡಿಸಿದ್ದ ಸಂಪ ಚಂಡೆ ನಿನಾದ ಪುಸ್ತಕ ಪ್ರಕಾಶನಕ್ಕೆ ಸಾಗರ ನಗರ ಸಭಾ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಚಾಲನೆ ನೀಡಿದರು
ಯಕ್ಷಸಂಪಚಂಡೆನಿನಾದ ಕಾರ್ಯಕ್ರಮದ ಆಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ....Mph.mp3
ಯಕ್ಷಸಂಪಚಂಡೆನಿನಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತುMph.mp3
ಯಕ್ಷಸಂಪಚಂಡೆನಿನಾದ ಕಾರ್ಯಕ್ರಮದ ಆಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ....

Monday, November 15, 2010

ಶ್ರೀ ಲಕ್ಷ್ಮೀನಾರಾಯಣ ಸಂಪ ಇವರ ಯಕ್ಷ ಜೀವನ ಯಾನ

ಯಕ್ಷ ರಸಿಕರಿಗೆಲ್ಲ ಸಂಪ ಎಂದೇ ಪರಿಚಿತರಾಗಿರುವ ಶ್ರೀ ಎಸ್ ವಿ ಲಕ್ಷ್ಮಿ ನಾರಾಯಣ ಸಂಪ ರಿಗೆ 50 ರ ಸಂಭ್ರಮ ಕಳೆದ ಮೂರುವರೆ ದಶಕಗಳಿಂದ ಯಕ್ಷ ತಿರುಗಾಟದಲ್ಲಿ ತೊಡಗಿಕೊಂಡಿರುವ ಸಂಪ ಅವರು ಆರಂಭದಲ್ಲಿ ವೇಷ ಕಟ್ಟಿ ಕುಣಿದವರು.ಆನಂತರ ಪ್ರಸಿದ್ದ ಚಂಡೆ ವಾದಕರಾಗಿ ಹಿನ್ನೆಲೆಯನ್ನು ಕಟ್ಟಿದವರು ,ಪ್ರಸಿದ್ದ ಮೇಳಗಳಲ್ಲಿ ದುಡಿದಿದ್ದಾರೆ ,ಎಲ್ಲಾ ಹಿರಿಯ ಭಾಗವತರ ಸಂಗಡ ಚಂಡೇವಾದನದಲ್ಲಿ ಸೈ ಎನಿಸಿಕೊಂಡಿದ್ದಾರೆ ,ಯಕ್ಷ ದಿಗ್ಗಜರ ಹೆಜ್ಜೆ ಗಳಿಗೆ ಸಮರ್ಥವಾಗಿ ಒದಗಿಸಿದ್ದಾರೆ ದೇಶದಾದ್ಯಂತ ಯಕ್ಷ ಸಂಚಾರ ದಲ್ಲಿ ಪಾಲ್ಗೊಂಡವರು .ಆಕಾಶವಾಣಿ ,ದೂರದರ್ಶನ ,ಚಲನಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡವರು ,ಮಕ್ಕಳಿಗೆ ಯಕ್ಷ ದೀಕ್ಷೆ ನೀಡಿ ,ಗೆಜ್ಜೆ ಕಟ್ಟಿಸಿದವರು ಯಾವುದೇ ದುರಭ್ಯಾಸಗಳಿಲ್ಲದ ಸಜ್ಜನ ಸುಶೀಲ ಕಲಾವಿದ .ಸಂಪರ ಈ ಯಕ್ಷ ಜೀವನ ಯಾನ  ದಲ್ಲಿ  ಪಾಲ್ಗೊಂಡು ಸಂಭ್ರಮಿಸೋಣ... ಹರೇರಾಮ ....ಯಕ್ಷಗಾನಂಗೆಲ್ಗೆ ...!
ಯಕ್ಷಸಂಪಚಂಡೆನಿನಾದ ಕಾರ್ಯಕ್ರಮದ ಆಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ....Mph.mp3

Saturday, November 13, 2010

"ಯಕ್ಷಸಂಪಚಂಡೆನಿನಾದ" ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಆಮಂತ್ರಣ .....

Sunday, October 17, 2010

ತಾಳಮದ್ದಲೆ- ಶರಸೇತುಬಂಧ ಭಾಗ 2

ಯಕ್ಷಗಾನದ ಗಾನಸುಧೆಯನ್ನು  ಸವಿಯಬೇಕೆ ....? ಹಾಗಾದರೆ…..        
ಇಲ್ಲಿ  ಕ್ಲಿಕ್ಕಿಸಿ Sharasetubanda 2.mp3
                                  ತಾಳಮದ್ದಲೆ- ಶರಸೇತುಬಂಧ   ಭಾಗ 2
 ಹಿಮ್ಮೇಳದಲ್ಲಿ
ಭಾಗವತರು -ಸೂರ್ಯನಾರಾಯಣ
 ಮದ್ದಲೆ :ಶ್ರೀನಾಥ
ಚಂಡೆ:ರಾಘವೇಂದ್ರ ಎಮ್ ಎಂ
ಮುಮ್ಮೇಳದಲ್ಲಿ
ಅರ್ಜುನನಾಗಿ :ಜಗದೀಶಶರ್ಮ 
ಹನುಮಂತನಾಗಿ :ಶಾಂತಾರಾಮ ಪ್ರಭು
ಕೃಷ್ಣನಾಗಿ :ರಮೇಶ ಹೆಗಡೆ ಗುಂಡುಮನೆ
ರಾಮನಾಗಿ :ಲಕ್ಷ್ಮಣ ಎಂ ಜಿ

ತಾಳಮದ್ದಲೆ- ಶರಸೇತುಬಂಧ ಭಾಗ 1

ಯಕ್ಷಗಾನದ ಗಾನಸುಧೆಯನ್ನು  ಸವಿಯಬೇಕೆ ....? ಹಾಗಾದರೆ…..  ಇಲ್ಲಿ  ಕ್ಲಿಕ್ಕಿಸಿ
http://www.esnips.com/doc/88787751-65ad-4936-bf04-26843bed2bb4/Sharasetubanda
ತಾಳಮದ್ದಲೆ- ಶರಸೇತುಬಂಧ   ಭಾಗ 1
 ಹಿಮ್ಮೇಳದಲ್ಲಿ
ಭಾಗವತರು -ಸೂರ್ಯನಾರಾಯಣ
 ಮದ್ದಲೆ :ಶ್ರೀನಾಥ
ಚಂಡೆ:ರಾಘವೇಂದ್ರ ಎಮ್ ಎಂ
ಮುಮ್ಮೇಳದಲ್ಲಿ
ಅರ್ಜುನನಾಗಿ :ಜಗದೀಶಶರ್ಮ 
ಹನುಮಂತನಾಗಿ :ಶಾಂತಾರಾಮ ಪ್ರಭು
ಕೃಷ್ಣನಾಗಿ :ರಮೇಶ ಹೆಗಡೆ ಗುಂಡುಮನೆ
ರಾಮನಾಗಿ :ಲಕ್ಷ್ಮಣ ಎಂ ಜಿ
  
  

Tuesday, October 5, 2010

"ಯಕ್ಷಗಾನ " ನಾ ಕಂಡಂತೆ -ಅಶೋಕ್ ಹೆಗಡೆ.

ಯಕ್ಷಗಾನ ಎಂಬ ವಿಶಿಷ್ಟ  ಸಮಷ್ಟಿ ಕಲೆ ಕರ್ನಾಟಕ ಭಾಗದಲ್ಲಿ ಉಂಟು ಮಾಡಿರುವ ಸಂಚಲನ ಮಹತ್ವದ್ದು ತನ್ನ ಮೂಲ ಕರಾವಳಿಯಾದರೂ ಅದು ಕರಾವಳಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ತನ್ನ ಗುಣ ಸಾಮರ್ಥ್ಯಕ್ಕನುಗುಣವಾಗಿಯೇ ಇಂದು ಅದು ನಾಡಿನ ಕಲೆ ಎನಿಸಿಕೊಂಡಿದೆ. ನಮ್ಮ ನಾಡಿನ ಹೊರಗೂ ಇದರ ಸಂಚಲನವಾಗಿದೆ  ಯಕ್ಷಗಾನ ತನ್ನ ಸಂಸ್ಕ್ರತಿ ರೂಪಿಸುವ ಗುಣವನ್ನು ಹೊತ್ತೇ ಸಂಚರಿಸುತ್ತಿದೆ .
ಯಕ್ಷಗಾನ ಅರ್ಥವಾಗುವುದು ಅದನ್ನು ನೋಡುವುದರಿಂದ ಹಾಗು ಕೇಳುವುದರಿಂದ ಮಾತ್ರ ,ಚಂಡೆ ಮದ್ದಲೆ ತಾಳಗಳ ಮಧುರನಾದ,ಭಾಗವತರ ಕಂಠಸಿರಿಯ ಆಮೋದ ,ವೇದಿಕೆಯಲ್ಲಿ ತಾನೇ ಮೇಲೆಂಬಂತೆ ಅಥವಾ ಕೇವಲ ಪಾತ್ರ ತಾನಲ್ಲ ಎಂಬಂತೆ ಪಾತ್ರಧಾರಿಗಳು ಕುಣಿಯುತ್ತಿದ್ದರೆ ಎಂಥವರೂ ಆಕರ್ಷಿತರಾಗಿ ಹುಚ್ಚೆದ್ದು ನೋಡಬೇಕು ,ಮನ :ಪೂರ್ವಕ ಸಂತಸ ಪಡಬೇಕು ಯಕ್ಷಗಾನದ ಶ್ರೀಮಂತಿಕೆಗೆ ಅದುವೇ ಸಾಕ್ಷಿ .ಪಾತ್ರಗಳಲ್ಲಿ ವಿವಿಧತೆ ,ಬಣ್ಣಗಾರಿಕೆ ವೇಷ ಭೂಷಣ ,ನವರಸ ತುಂಬಿದ ಅಭಿನಯ ವೈಶಿಷ್ಟ್ಯ ಪೂರ್ಣವಾದ ಮಾತುಗಾರಿಕೆ ಆಕರ್ಷಣೀಯವಾದ ತಾಳ ಲಯಬದ್ಧ ಕುಣಿತ    ಶ್ರುತಿಬದ್ಧ ಗಾಯನ ವಾದನ ಇದೆಲ್ಲವನ್ನು ಮೇಳೈಸಿಕೊಂಡ ಒಂದು ಸಮಸ್ಟ್ಟಿಕಲೆ ಯಕ್ಷಗಾನ .....
                                                                                                                            ಮುಂದುವರಿಯುವುದು ........